Total Pageviews

Wednesday, March 16, 2011

ಒಲವೇ ಮ೦ದಾರ...

ನಿರ್ದೇಶನ: ಜಯತೀರ್ಥ
ಪಾತ್ರವರ್ಗ: ಶ್ರೀಕಾ೦ತ್, ಆಕಾಂಕ್ಷ, ಮು೦ತಾದವರು...

ನಿಜವಾದ ಪ್ರೀತಿ ಎ೦ದರೇನು ಎನ್ನುವುದನ್ನು ಎಲ್ಲರ ಮನಸಲ್ಲೂ ಅಚ್ಚಿಳಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಒಬ್ಬ ಶ್ರೀಮ೦ತನ ಮಗನಾದ ನಾಯಕ (ಶ್ರೀಕಾಂತ್)ನಿಗೆ ನೃತ್ಯ ಬಿಟ್ಟು ಇನ್ನಾವುದರಲ್ಲೂ ಆಸಕ್ತಿ ಇರುವುದಿಲ್ಲ. ಒ೦ದು ನೃತ್ಯ ಸ್ಪರ್ಧೆಯಲ್ಲಿ ಒಬ್ಬ ನೃತ್ಯಗಾತಿಯನ್ನು ನೋಡಿ ಅವಳನ್ನು ಒಲಿಸಿಕೊಳ್ಳುತ್ತಾನೆ. ಅವನಿಗೆ ಅವಳ ಮೇಲೆ ಪ್ರೀತಿ ಹುಟ್ಟುವ ಸಮಯದಲ್ಲೇ ತಳ್ಳು ಗಾಡಿಯ ಮೇಲೆ ಹೆಂಡತಿಯನ್ನು ಕಾಶಿಗೆ ಕರೆದುಕೊ೦ಡು ಹೋಗುವವನನ್ನು ಕ೦ಡು ತಾನೂ ತನ್ನ ಪ್ರೇಯಸಿಯನ್ನು ಕಾಣಲು ಅಸ್ಸಾಂಗೆ ಓಡಲು ಪ್ರಾರಂಭಿಸುತ್ತಾನೆ. ಕಷ್ಟ ಪಟ್ಟು ಅಸ್ಸಾಂ ತಲುಪುತ್ತಾನೆ.

ಅಸ್ಸಾಂ ತಲುಪುವ ಮಧ್ಯದಾರಿಯಲ್ಲಿ ನಿಜ ಸ೦ಗತಿಯಾದ ದಶರಥ್ ಮಾ೦ಜೆ ಬೆಟ್ಟ ಒಡೆದ ಘಟನೆಯನ್ನು ನಿರ್ದೇಶಕರು ಸೇರಿಸಿದ್ದಾರೆ. ರವಿ ಕುಮಾರ್ ಅವರ ಛಾಯಾಗ್ರಹಣ ಅದ್ಭುತವಾಗಿದೆ. ದೇವ ಅವರ ಸಂಗೀತ ಕಿಕ್ಕೇರಿಸುವಂತಿಲ್ಲ. ಶ್ರೀಕಾ೦ತ್ ಅಭಿನಯ ಅಷ್ಟಕ್ಕಷ್ಟೇ. ರ೦ಗಾಯಣ ರಘು ಹಾಗೂ ದಶರಥ್ ಮಾ೦ಜೆ ಪಾತ್ರಧಾರಿ ಇಬ್ಬರ ನಟನೆ ಮೈ ಜುಮ್ಮೆನಿಸುವ೦ತಿದೆ. ಹೊಸ ನಿರ್ದೇಶಕ ಒ೦ದು ಉತ್ತಮ ಕಥೆಯನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರಕಥೆ ಉತ್ತಮವಾಗಿದೆ. ಪ್ರೇಕ್ಷಕರನ್ನು ಪೂರ್ತಿ ಸಿನಿಮಾ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ರ೦ಗಾಯಣ ರಘು ತನ್ನ ಹೆಂಡತಿಯನ್ನು ಗಾಡಿಯ ಮೇಲೆ ಕೂರಿಸಿಕೊಂಡು ತಳ್ಳಿಕೊಂಡು ಕಾಶಿಗೆ ಹೋಗುವುದು ಹಾಗೂ ಶ್ರೀಕಾ೦ತ್ ಅಸ್ಸಾಂಗೆ ಓಡಿ ಹೋಗುವದನ್ನು ಸ್ವಲ್ಪ ಅರಗಿಸಿಕೊಳ್ಳಬೇಕು. ಇನ್ನೆಲ್ಲವೂ ನೈಜತೆ ಹತ್ತಿರವಾಗಿದೆ.

ಹೊಸಬರ ಪ್ರಯತ್ನ ಯಶಸ್ವಿಯಾಗಿದೆ. ಎಲ್ಲರೂ ನೋಡಿ ಆನಂದಿಸಬಹುದಾದ ಕೌಟುಂಬಿಕ ಚಿತ್ರ.