Total Pageviews

Monday, October 3, 2011

ಸಾರಥಿ - ಕಥೆ ಬರೀ ವಾಂತಿ

ಪಾತ್ರವರ್ಗ: ದರ್ಶನ್, ದೀಪಾ ಸನ್ನಿಧಿ, ರಂಗಾಯಣ ರಘು, ಶರತ್ ಲೋಹಿತಾಶ್ವ, ಮುಂತಾದವರು
ಸಂಗೀತ: ವಿ. ಹರಿಕೃಷ್ಣ
ನಿರ್ದೇಶನ: ದಿನಕರ್ ಎಸ್



ಒಂದು ಉತ್ತಮವಾದ ಹಳೆಯ ಕಥೆಯನ್ನು ಇಟ್ಟುಕೊಂಡು ಒಳ್ಳೆಯ ಚಿತ್ರಕಥೆ ಮಾಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಚಿತ್ರಕಥೆ ತುಂಬಾ ಉದ್ದವಾದ್ದರಿಂದ "ಸಾರಥಿ" ಚಿತ್ರವು ಎರಡೂಮುಕ್ಕಾಲು ಗಂಟೆ ಜನರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ. ಅನವಶ್ಯಕ ಹಾಡುಗಳು, ದೃಶ್ಯಗಳಿಂದ ಬೋರಾಗುತ್ತದೆ. ದರ್ಶನ್ ಆಟೋ ಡ್ರೈವರ್ ಆಗಿರುವುದು ಕೇವಲ ಆಟೋ ಚಾಲಕರ ಸೆಂಟಿಮೆಂಟ್ ಗಾಗಿ ಅಷ್ಟೇ ಹೊರತು ಕಥೆಗೆ ಅದರ ಅವಶ್ಯಕತೆ ಇಲ್ಲ. ಪಾಳ್ಳೇಗಾರ ಅಳ್ವಿಕೆಯ ಹಳೇ ಕಥೆಗೆ ಗಣಿಯನ್ನು ಸೇರಿಸಿ ಕಥೆಯಲ್ಲಿ ಹೊಸತನವನ್ನು ತರಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕಥೆ ತುಂಬಾ ಹಳೆಯದಾಗಿದ್ದು ಚಿತ್ರಕಥೆ ಅನವಶ್ಯಕವಾಗಿ ಉದ್ದವಾಗಿದೆ. ಕಥೆಯಲ್ಲಿ ಎಲ್ಲೋ ಒಂದು ಕಡೆ ತೆಲುಗಿನ ಮಗಧೀರ ಚಿತ್ರ ನೆನಪಾಗುತ್ತದೆ.

ಕೃಷ್ಣ ಕುಮಾರ್ ಛಾಯಾಗ್ರಹಣ ಉತ್ತಮವಾಗಿದೆ. ಹರಿಕೃಷ್ಣರ ಸಂಗೀತ ಹಾಡುಗಳು ಹಾಗೂ ಚಿತ್ರದುದ್ದಕ್ಕೂ ಅದ್ಭುತ. ಶರತ್ ಲೋಹಿತಾಶ್ವ ತಮ್ಮ ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ. ಉಳಿದವರ ಅಭಿನಯ ಅಷ್ಟಕ್ಕಷ್ಟೇ. ದಿನಕರ್ ಅವರ ಹಿಂದಿನ ಎರಡು ಚಿತ್ರಗಳಿಗಿಂತ ಇದು ವಿಭಿನ್ನವಾಗಿದ್ದರೂ ಸಹ ಇದೊಂದು ಉತ್ತಮ ಚಿತ್ರವಾಗಿಲ್ಲ. ಚಿತ್ರಕಥೆ ಚಿಕ್ಕದಾಗಿದ್ದರೆ ಇದೊಂದು ಒಳ್ಳೆಯ ಸಿನಿಮಾ. ಸಾಹಸ ದೃಶ್ಯಗಳು ಕೇವಲ ದರ್ಶನ್ ಅಭಿಮಾನಿಗಳಿಗೆ ಮಾತ್ರ. ದಯವಿಟ್ಟು ಅದರಲ್ಲಿ ನೈಜತೆ ಹುಡುಕ ಹೋಗಬೇಡಿ. ದರ್ಶನ್ ಅಭಿನಯ ಎಂದಿನಂತೆಯೇ ಇದೆ.

ಒಟ್ಟಾರೆ, "ಸಾರಥಿ" ಚಿತ್ರ ದರ್ಶನ್ ಗಾಗಿ. "ಜೊತೆ ಜೊತೆಯಲಿ" ಹಾಗೂ "ನವಗ್ರಹ" ದಂತ ಅದ್ಭುತ ಸಿನಿಮಾ ನೀಡಿದ ದಿನಕರ್ ಗೆ ಅಲ್ಲ...